ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ದಾವಣಗೆರೆ ಇವರು ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾಂಭ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಬೆಳಿಗ್ಗೆ 6.30 ಕ್ಕೆ ಧ್ವಜಾರೋಹಣವನ್ನು ಹಿರಿಯರಾದ ಎಸ್.ಎಂ. ವಾಮದೇವಯ್ಯ ನೆರವೇರಿಸಲಿದ್ದಾರೆ.
ದಾವಣಗೆರೆ ವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ವಿ. ಅಶೋಕ್ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲದಾದ ಡಾ.ಎಂ. ಮಂಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಮದ್ ಅಲಿ, ರಶ್ಮಿ, ಲೋಹಿತ್ ಕುಮಾರ್, ಜಿ.ಎನ್. ಸತೀಶ್, ಬಸವರಾಜ, ಗುಡ್ಡದಮನೆ ಮನೆ, ಡಾ. ಟಿ. ಕರಿಬಸಪ್ಪ, ಗೌಸ್ ಖಾನ, ಕೆ. ಶ್ಯಾಮಲ, ಜಿ. ಕಾವ್ಯಶ್ರೀ ಮತ್ತಿತರರಿದ್ದರು.