ಹರಿಹರ : ಇಂದು ರಾಜ್ಯೋತ್ಸವ

ಹರಿಹರ, ನ. 29- ನಗರದ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಾಳೆ ದಿನಾಂಕ 30ರ ಗುರುವಾರ ಕನ್ನಡ ರಾಜ್ಯೋತ್ಸವ ಮತ್ತು ನಾಡು, ನುಡಿಗಾಗಿ ಸೇವೆ ಸಲ್ಲಿಸಿರುವ ಮಹನೀಯರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಅಧ್ಯಕ್ಷ ಪ್ರೀತಂ ಬಾಬು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಂದು ಬೆಳಿಗ್ಗೆ 8-30 ಕ್ಕೆ ಜೆ.ಸಿ.ಬಡಾವಣೆ ಒಂದನೇ ಮೇನ್, ನಾಲ್ಕನೇ ಕ್ರಾಸ್‌ನಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ನಿಂಬಕ್ಕ ಚಂದಾಪೂರ್ ಅವರಿಂದ ಧ್ವಜಾರೋಹಣ ನಡೆಯಲಿದೆ. ಸಂಜೆ 4-30 ಕ್ಕೆ ಕಸಬಾ ಊರಮ್ಮ ದೇವಿಯ ದೇವಸ್ಥಾನ ಹತ್ತಿರ ವೇದಿಕೆಯ ಕಾರ್ಯಕ್ರಮವನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸುವರು. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಪ್ರಾಸ್ತಾವಿಕ ನುಡಿಯನ್ನಾಡುವರು. ಜಿಲ್ಲಾ ಅಧ್ಯಕ್ಷ ಜಮ್ಮನಳ್ಳಿ ನಾಗರಾಜ್ ಅಧ್ಯಕ್ಷತೆ ವಹಿಸುವರು. 

ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಸ್.ರಾಮಪ್ಪ, ಹೆಚ್.ಎಸ್. ಶಿವಶಂಕರ್, ಇನ್‌ಸೈಟ್ ಸಂಸ್ಥೆ ಬಿ.ಜಿ. ವಿನಯ ಕುಮಾರ್, ತಪೋವನ ಛೇರ್ಮನ್ ಶಶಿಕುಮಾರ್ ಮಹೆರ್ವಾಡೆ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಇತರೆ ಗಣ್ಯಮಾನ್ಯರು ಆಗಮಿಸುವರು. ಫ್ರೆಂಡ್ಸ್ ಮೆಲೋಡಿಯಸ್ ದಾವಣಗೆರೆ ಇವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ರಮೇಶ್ ಮಾನೆ, ಗೌರವಾಧ್ಯಕ್ಷ ಸಿದ್ದಪ್ಪ,  ಶಂಕರ್ ದುರುಗೋಜಿ, ರಮೇಶ್ ರಾಜು, ಚಂದ್ರಪ್ಪ ಇತರರು ಹಾಜರಿದ್ದರು

error: Content is protected !!