ದಾವಣಗೆರೆ, ನ. 29- ಕನ್ನಡದ ಸಾಹಿತಿ ವ್ಯಾಸ ರಾಯ ಬಲ್ಲಾಳ ಅವರ ಶತಮಾನೋತ್ಸವದ ಪ್ರಯುಕ್ತ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮತ್ತು ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಿಂದ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ನಗರದ ಯುವ ಬರಹಗಾರ ರಾದ ಶ್ರೀಮತಿ ಸುನೀತಾ ಪ್ರಕಾಶ್ ಅವರ ಪದ್ದವ್ವ ಮತ್ತು ಕೌದಿ ಕಥೆಗೆ ಪ್ರಥಮ ಸ್ಥಾನ ಲಭಿಸಿದೆ. ಇತ್ತೀಚೆಗಷ್ಟೇ ಸುನೀತಾ ಅವರ ಒಂದು ಕಥೆ ರಾಜ್ಯಮಟ್ಟದಲ್ಲಿ ಎರಡನೆಯ ಸ್ಥಾನ ಪಡೆದಿತ್ತು.
ಸುನೀತಾ ಪ್ರಕಾಶ್ ಕಥೆಗೆ ಪ್ರಥಮ ಸ್ಥಾನ
![16 sunitha prakash 30.11.2023 ಸುನೀತಾ ಪ್ರಕಾಶ್ ಕಥೆಗೆ ಪ್ರಥಮ ಸ್ಥಾನ](https://janathavani.com/wp-content/uploads/2023/11/16-sunitha-prakash-30.11.2023.jpg)