ದಾವಣಗೆರೆ, ನ.28- ವೈಯಕ್ತಿಕ ಸಾಲ ಕೊಡುವುದಾಗಿ ಹೇಳಿ 59738 ರೂ.ಗಳನ್ನು ವಂಚಿಸಿದ ಘಟನೆ ಕಳೆದ ನ.14ರಂದು ನಡೆದಿದೆ. ಎಂಸಿಸಿ ಬಿ ಬ್ಲಾಕ್ ವಾಸಿ ಮೆಡಿಕಲ್ ರೆಪ್ ಕೆಲಸ ಮಾಡುವ ಕುಮಾರ್ ಎಸ್.ವಿ. ವಂಚನೆಗೊಳಗಾದ ವ್ಯಕ್ತಿ. ಇವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಕರೆ ಮಾಡಿ ಉಜ್ಜೀವನ್ ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ವೈಯಕ್ತಿಕ ಸಾಲ ಕೊಡುವುದಾಗ ಹೇಳಿ ನಂಬಿಸಿ, ಸಾಲಕ್ಕೆ ವಿವಿಧ ಶುಲ್ಕಗಳ ನೆಪದಲ್ಲಿ 59738 ರೂ. ಪಡೆದಿದ್ದಾನೆ. ನಂತರವೂ ಹಣ ಕೇಳಿದಾಗ ತಾನು ಮೋಸದ ಜಾಲದಲ್ಲಿ ಸಿಲುಕಿರುವುದು ಮನವರಿಕೆಯಾಗಿ ಸಿಇಎನ್ ಅಪರಾಧ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.
July 24, 2024