ಶಾಲೆ ಮುಚ್ಚಿಸುವ ಬೆದರಿಕೆ: ಚೇತನ್ ಕನ್ನಡಿಗ, ಇತರರ ಮೇಲೆ ದೂರು ದಾಖಲು

ದಾವಣಗೆರೆ, ನ.28- ಶಾಲೆಯ ಮೇಲೆ ಮೇಲಾಧಿಕಾರಿಗಳಿಗೆ ದೂರು ನೀಡಿ, ಶಾಲೆಯನ್ನು ಮುಚ್ಚಿಸುವುದಾಗಿ ಬೆದರಿಸಿ, ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಚೇತನ್ ಜಿ. ಅಲಿಯಾಸ್ ಚೇತನ್ ಕನ್ನಡಿಗ, ನಾಗರಾಜ್ ಸುರ್ವೆ, ನೋಷಿನ್ ತಾಜ್, ಶ್ರೇಯಸ್ ಹಾಗೂ ಇತರೆ ಇಬ್ಬರ ಮೇಲೆ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಲಾಗಿದೆ.

ಸೈಯದ್ ಅಕ್ಬರ್ ಅಲಿ ಎಂಬುವವರು ದೂರು ಸಲ್ಲಿಸಿದ್ದು, ಚೇತನ್ ಕನ್ನಡಿಗ ಐದು ಜನ ಬೆಂಬಲಿಗರೊಂದಿಗೆ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು, ಕೊಡದಿದ್ದರೆ ಶಾಲೆ ಮುಚ್ಚಿಸುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

error: Content is protected !!