ಎಸ್‌ಬಿಸಿ ಕಾಲೇಜಿನಲ್ಲಿ ಇಂದು ರಾಜ್ಯೋತ್ಸವ

ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜ್ ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ಬೆಳಿಗ್ಗೆ 10.30 ಗಂಟೆಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು.

ಸಮಾರಂಭದ ಅಧ್ಯಕ್ಷತೆಯನ್ನು  ಕಾಲೇಜು ಅಧ್ಯಕ್ಷ ಬಿ.ಸಿ.ಉಮಾಪತಿ ವಹಿಸುವರು. ದಾವಿವಿ ಕುಲಸಚಿವರಾದ ಶ್ರೀಮತಿ ಬಿ.ಬಿ. ಸರೋಜ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ  ಸರ್ಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜ್   ಪ್ರಾಂಶುಪಾಲ ಡಾ.ಎಂ.ಮಂಜಣ್ಣ,  ವಿನಾಯಕ ಎಜುಕೇಷನ್ ಟ್ರಸ್ಟ್ ಸದಸ್ಯರಾದ  ಕೆ.ಜೆ.ಸುಗಂಧರಾಜ್, ಎಸ್.ಕೆ.ವೀರಣ್ಣ ಮತ್ತು ಅಥಣಿ ಪ್ರಶಾಂತ್ ಆಗಮಿಸುವರು. ಪ್ರಾಂಶುಪಾಲ ಡಾ.ಕೆ.ಷಣ್ಮುಖ ಪ್ರಾಸ್ತಾವಿಕವಾಗಿ ಮಾತನಾಡುವರು.

error: Content is protected !!