ತುರ್ಚಘಟ್ಟದಲ್ಲಿ ಇಂದು ಕಸಾಪ ಸಾಹಿತ್ಯೋತ್ಸವ, ದತ್ತಿ ಉಪನ್ಯಾಸ

ದಾವಣಗೆೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲಾ-ಕಾಲೇಜ್‌ ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹೊಸಬೆಳವನೂರು ಗ್ರಾಮ ಪಂಚಾಯತಿ ಸದಸ್ಯ ಡಿ.ಆರ್. ಶೇಖರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಂ. ನಾಗರಾಜ್‌ ವಚನ ಸಾಹಿತ್ಯ ಮತ್ತು ಜೀವನ ಮೌಲ್ಯಗಳು’ ಕುರಿತು ಕಸಾಪ ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ ಉಪನ್ಯಾಸ ನೀಡುವರು.

ಮುಖ್ಯ ಅತಿಥಿಗಳಾಗಿ ಹಿರಿಯ ನಾಗರಿಕರ ಬಡಾವಣೆ ಸಂಯೋಜಕ ನವೀನ್, ಟಿ.ಎ. ಆಶು, ರೇವಣಸಿದ್ಧಪ್ಪ ಅಂಗಡಿ, ಷಡಾಕ್ಷರಪ್ಪ ಎಂ. ಬೇತೂರು ಭಾಗವಹಿಸಲಿದ್ದಾರೆ. 

ದತ್ತಿ ಉಪನ್ಯಾಸ:  ತಾಲ್ಲೂಕು ಕಸಾಪ ವತಿಯಿಂದ ಇಂದು ಮಧ್ಯಾಹ್ನ 2 ಗಂಟೆಗೆ ದತ್ತಿ ಉಪನ್ಯಾಸ ನಡೆಸಿಕೊಡದಲಿದ್ದಾರೆ. ಎಸ್.ಟಿ. ಹನುಮಂತಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಬಿ. ಕರಿಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾದ ಜಲಜಾಕ್ಷಮ್ಮ, ರೇವಣಸಿದ್ಧಪ್ಪ ಅಂಗಡಿ, ನವೀನ್, ಆರ್. ವಿಜಯ್ ಕುಮಾರ್, ಸುಮತಿ ಜಯಪ್ಪ, ಕಲ್ಪನಾ, ಷಡಾಕ್ಷರಪ್ಪ  ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!