ನಗರದ ಬಿ.ಐ.ಇ.ಟಿ ಯಲ್ಲಿ ಇಂದು ರಾಜ್ಯೋತ್ಸವ

ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ವರ್ಷದ ಕನ್ನಡ ರಾಜ್ಯೋತ್ಸವ ಮತ್ತು ವಿದ್ಯಾರ್ಥಿ ಪರಿಷತ್‌ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇಂದು ಮಧ್ಯಾಹ್ನ 3 ಗಂಟೆಗೆ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಾಂಸ್ಕೃತಿಕ ಭವನದಲ್ಲಿ ನೆರವೇರಲಿದೆ.

ಕ.ಸಾ.ಪ. ಮಾಜಿ ಜಿಲ್ಲಾಧ್ಯಕ್ಷ ಡಾ. ಎಚ್‌.ಎಸ್‌. ಮಂಜುನಾಥ ಕುರ್ಕಿ ಆಗಮಿಸುವರು. ಕಾಲೇಜಿನ ಪ್ರಾಂಶುಪಾಲ ಡಾ. ಎಚ್‌.ಬಿ. ಅರವಿಂದ್‌, ವಿದ್ಯಾರ್ಥಿ ಪರಿಷತ್‌ ಮುಖ್ಯಾಧಿಕಾರಿ ಡಾ. ಜಿ.ಪಿ. ದೇಸಾಯಿ, ವಿದ್ಯಾರ್ಥಿ ಪರಿಷತ್‌ ಮುಖ್ಯ ಉಪಮುಖ್ಯಾಧಿಕಾರಿ ಡಾ. ವಿನುತ ಎಚ್‌.ಪಿ.  ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

error: Content is protected !!