ಶ್ಯಾಗಲೆಯಲ್ಲಿ ಇಂದಿನಿಂದ ಎನ್‌.ಎಸ್‌.ಎಸ್‌ ಶಿಬಿರ

ದಾವಣಗೆರೆ ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ರೂಸಾ ಅನುದಾನಿತ ದಾವಣಗೆರೆ NA C’B’ ++ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ-1 ಮತ್ತು 2ರ ವಿಶೇಷ ವಾರ್ಷಿಕ ಶಿಬಿರವನ್ನು ದಾವಣಗೆರೆ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ಇಂದಿನಿಂದ ಬರುವ ಡಿಸೆಂಬರ್ 1 ರವರೆಗೆ ಹಮ್ಮಿಕೊಳ್ಳಲಾಗಿದೆ.

ಇಂದು ಸಂಜೆ 5:30ಕ್ಕೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಸಮಾರಂಭವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಮಂಜಣ್ಣ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ.ಎಸ್. ಬಸವಂತಪ್ಪ ಮುಖ್ಯಅತಿಥಿಗಳಾಗಿ ಆಗಮಿಸುವರು. 

ಶ್ಯಾಗಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಮ್ಮ, ಉಪಾಧ್ಯಕ್ಷೆ ಎಸ್. ಮಂಜಮ್ಮ, ನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಶ್ಯಾಗಲೆ ಪಶು ವೈದ್ಯಾಧಿಕಾರಿ ಡಾ. ನಾಗರಾಜ್, ಬಿ.ಸಿ. ಸಿದ್ದಪ್ಪ, ಡಾ. ಕೆ. ಎಂ. ಮಂಜುನಾಥ್ ಶ್ಯಾಗಲೆ, ಡಾ. ಎಂ.ಪಿ. ಭೀಮಪ್ಪ, ಟಿ. ಶೇಷಪ್ಪ ಸೇರಿದಂತೆ ಇನ್ನಿತರೆ ಅತಿಥಿ ಗಣ್ಯರು ಭಾಗವಹಿಸುವರು.

error: Content is protected !!