ವಾಜಪೇಯಿ ಹುಟ್ಟುಹಬ್ಬ ಆಚರಣೆಗೆ ನಿರ್ಧಾರ

ವಾಜಪೇಯಿ ಹುಟ್ಟುಹಬ್ಬ ಆಚರಣೆಗೆ ನಿರ್ಧಾರ

ದಾವಣಗೆರೆ, ನ.22- ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿಯವರ  ಹುಟ್ಟುಹಬ್ಬವನ್ನು ಬರುವ ಡಿಸೆಂಬರ್ ಮಾಹೆಯಲ್ಲಿ ಅದ್ಧೂರಿಯಾಗಿ ಆಚರಿಸಲು ಇಂದಿಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಬಿಜೆಪಿ ಮೂಲ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಹಿರಿಯರಾದ ಬಿ.ಎಂ. ಷಣ್ಮುಖಯ್ಯ ಆವರಗೊಳ್ಳ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಮೂಲ ಬಿಜೆಪಿ ಕಾರ್ಯಕರ್ತರು ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರಾಗಿ ಬಿ.ಎಂ. ಷಣ್ಮುಖಯ್ಯ ಆವರಗೊಳ್ಳ, ಜಿಲ್ಲಾ ಅಧ್ಯಕ್ಷರಾಗಿ ಎಂ.ಪಿ. ಕೃಷ್ಣಮೂರ್ತಿ ಪವಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್‌.ಎಸ್‌. ಲಿಂಗರಾಜು ಅವರುಗಳು ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿಗಳಾಗಿ ಚಂದ್ರಾನಾಯಕ್‌ ಜಗಳೂರು, ಶಿವಕುಮಾರಸ್ವಾಮಿ ಜಗಳೂರು, ಉಪಾಧ್ಯಕ್ಷರುಗಳಾಗಿ ಆರ್‌. ಪ್ರತಾಪ್‌ (ದಕ್ಷಿಣ), ಶಂಕರ್‌ ಸಾ ಲದ್ವಾ ಹರಿಹರ, ಕೆ. ಶಿವಶಂಕರ್‌, ಬಸವಂತಪ್ಪ ನರಗನಹಳ್ಳಿ, ಜಿ. ಮರುಳಸಿದ್ದಪ್ಪ ಮಂಡಲೂರು ಇವರುಗಳು ಆಯ್ಕೆಯಾದರು.

ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ವೈ.ಬಿ. ಸಿದ್ದೇಶ್‌ ವಡ್ಡಿನಹಳ್ಳಿ, ಸಂತೋಷ್‌ ಪೈಲ್ವಾನ್‌, ಗುಬ್ಬಿ ಬಸವರಾಜ್‌, ಸಹ ಸಂಘಟನಾ ಕಾರ್ಯ ದರ್ಶಿಗಳಾಗಿ ಕೆ.ಟಿ. ಕಲ್ಲೇಶ್‌, ಹಿರೇಅರಕೆರೆ ಹೆಚ್‌.ಎಂ. ನಾಗರಾಜ್‌, ಜಿಲ್ಲಾ ವಕ್ತಾರರಾಗಿ ಮಾಲತೇಶ್‌ ಗುಪ್ತಾ, ಕೋಶಾಧ್ಯಕ್ಷರಾಗಿ ಗೋಪಾಲ್‌ರಾವ್ ಸಾವಂತ್‌ ಆಯ್ಕೆಯಾಗಿದ್ದಾರೆ.  ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಶ್ರೀಮತಿ ಸರೋಜಮ್ಮ ದೀಕ್ಷಿತ್‌ ಅವರನ್ನು ಆಯ್ಕೆ ಮಾಡಲಾಯಿತು.

error: Content is protected !!