ದಾವಣಗೆರೆ, ನ.22- ಯುವಕರ ಬೈಕ್ ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಫೋನ್ ಹಾಗೂ ನಗದು ಕಿತ್ತುಕೊಂಡ ಘಟನೆ ಹದಡಿ ಮೇಲ್ಸೇತುವೆ ಬಳಿ ಸೋಮವಾರ ರಾತ್ರಿ 1.30ರ ಸುಮಾರಿಗೆ ನಡೆದಿದೆ.
ಚೇತನ್ (33) ಹಾಗೂ ಸ್ನೇಹಿತ ಗಣೇಶ್ ಇವರು ಸುಬ್ರಮಣ್ಯ ನಗರದಲ್ಲಿರುವ ಶ್ರೀ ವಿನಾಯಕ ರೈಸ್ ಮಿಲ್ನಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಊಟ ಮಾಡಿಕೊಂಡು ರೈಸ್ಮಿಲ್ ಕಡೆ ಹೋಗುವಾಗ ಹದಡಿ ಬ್ರಿಡ್ಜ್ ಬಳಿ ಎರಡು ಬೈಕ್ಗಳಲ್ಲಿ ಐವರು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಮೊಬೈಲ್, 1 ಸಾವಿರ ರೂ. ನಗದು ಹಣ ಹಾಗೂ ಬೈಕ್ ಕೀ ಕಿತ್ತುಕೊಂಡು ಬೆದರಿಸಿ ಹೋಗಿದ್ದಾರೆ. ಈ ಕುರಿತು ಚೇತನ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.