ರಾಷ್ಟ್ರೀಯ ಮಹಿಳಾ ಒಕ್ಕೂಟದ ಎನ್ಎಫ್ಐಡಬ್ಲ್ಯು ದಾವಣಗೆರೆ ಜಿಲ್ಲಾ ಸಮ್ಮೇಳನವು ಇಂದು ನಡೆಯಲಿದೆ ಎಂದು ಎನ್ಎಫ್ಐಡಬ್ಲ್ಯು ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಸ್ ಎಸ್ ಮಲ್ಲಮ್ಮ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 11.30ಕ್ಕೆ ಕಾಂ. ಪಂಪಾಪತಿ ಭವನದಲ್ಲಿ ನಡೆಯುವ ಎನ್ಎಫ್ಐಡಬ್ಲ್ಯು ಮಹಿಳಾ ಜಿಲ್ಲಾ ಸಮ್ಮೇಳನವನ್ನು ರಾಜ್ಯಾಧ್ಯಕ್ಷರಾದ ಕಾಂ ಎ. ಜ್ಯೋತಿ ಉದ್ಘಾಟಿಸುವರು. ಎನ್ಎಫ್ಐಡಬ್ಲ್ಯು ಜಿಲ್ಲಾ ಮುಖಂಡರುಗಳಾದ ಎಂ.ಬಿ. ಶಾರದಮ್ಮ, ವಿಶಾಲಾಕ್ಷಿ, ಗಾಯತ್ರಿ, ಉಮಾ, ಸರೋಜಾ, ರುದ್ರಮ್ಮ, ಜ್ಯೋತಿಲಕ್ಷ್ಮಿ, ವಿಮಲಾಕ್ಷಿ, ಚೆನ್ನಮ್ಮ, ಯಶೋಧ, ಅಕ್ಕಮ್ಮ ಸೇರಿದಂತೆ ಇತರೆ ಮುಖಂಡರು ಭಾಗವಹಿಸುವರು.
ಜಿಲ್ಲಾ ಕಾರ್ಯದರ್ಶಿ ಆವರೆಗೆರೆ ಚಂದ್ರು, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ. ಉಮೇಶ್, ಹಿರಿಯ ಕಾರ್ಮಿಕ ಮುಖಂಡರಾದ ಕಾಂ. ಆನಂದರಾಜ್ ಅತಿಥಿಗಳಾಗಿ ಆಗಮಿಸುವರು. ಇಪ್ಟಾ ಸಂಗಾತಿಗಳು ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಸಮ್ಮೇಳನಕ್ಕೆ ಶುಭ ಕೋರುವರು.