ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾಗಿ ಲಲಿತಾ ಕಲ್ಲೇಶ್

ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾಗಿ ಲಲಿತಾ ಕಲ್ಲೇಶ್

ದಾವಣಗೆರೆ, ನ. 12 – ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ದವೀರಪ್ಪ ಬಡಾವಣೆ ಶಾಖೆ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ರಾಗಿರುವ ಶ್ರೀಮತಿ ಲಲಿತಾ ಕಲ್ಲೇಶ್‍ ಅವಿರೋಧವಾಗಿ  ಪುನ ರಾಯ್ಕೆ ಯಾಗಿದ್ದಾರೆ ಎಂದು ಕಲಾ ಕುಂಚ ಮಹಿಳಾ ವಿಭಾಗದ ಸಂಸ್ಥಾ ಪಕರಾದ ಜ್ಯೋತಿ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಿದ್ದವೀರಪ್ಪ ಬಡಾವಣೆಯ ಸಂಕೇತ್ ಸಭಾಂಗಣದಲ್ಲಿ ಇತ್ತೀಚಿಗೆ ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಬಡಾವಣೆಯ 2023-25ನೇ ಸಾಲಿನ ಹೊಸ ಸಮಿತಿ ರಚನೆ ಮಾಡಲಾಯಿತು. 

ಪ್ರಧಾನ ಕಾರ್ಯದರ್ಶಿ ಯಾಗಿ ಸುಮಾ ಏಕಾಂತಪ್ಪ, ಖಜಾಂಚಿಯಾಗಿ ರೇಣುಕಾ ರಾಮಣ್ಣ, ಸಂಚಾಲಕರಾಗಿ ಸಂಧ್ಯಾ ಶ್ರೀನಿವಾಸ್, ಸಹ ಕಾರ್ಯದರ್ಶಿ ವೀಣಾ ಕೃಪಾ ಸರ್ವಾನುಮತದಿಂದ ಆಯ್ಕೆಯಾದರು.  ಕಲಾಕುಂಚ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!