ವಾಲ್ಮೀಕಿ ಜಾತ್ರೆ : ನಾಡಿದ್ದು ರಾಜನಹಳ್ಳಿ ಶ್ರೀಗಳಿಂದ ರಾಜ್ಯ ಪ್ರವಾಸ

ವಾಲ್ಮೀಕಿ ಜಾತ್ರೆ : ನಾಡಿದ್ದು  ರಾಜನಹಳ್ಳಿ ಶ್ರೀಗಳಿಂದ ರಾಜ್ಯ ಪ್ರವಾಸ

ಮಲೇಬೆನ್ನೂರು, ನ. 12 – ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದಲ್ಲಿ 2024ರ ಫೆ. 8 ಮತ್ತು 9 ರಂದು ಜರುಗಲಿರುವ 6ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಇದೇ ದಿನಾಂಕ 15 ರಿಂದ ಡಿಸೆಂಬರ್‌ 15ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. 

ಮೊದಲ ಹಂತದ ಈ ಪ್ರವಾಸವು 30 ದಿನ ನಡೆಯಲಿದ್ದು, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳ 90 ತಾಲ್ಲೂಕುಗಳಲ್ಲಿ ಶ್ರೀಗಳು ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ. ಪ್ರತಿ ದಿನ 3 ತಾಲ್ಲೂಕುಗಳಲ್ಲಿ ಈ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ.

ನಾಡಿದ್ದು ದಿನಾಂಕ 15ರ ಬೆಳಿಗ್ಗೆ 10 ಗಂಟೆಗೆ ಹರಿಹರ ನಗರದ ಸಾರ್ವ ಜನಿಕ ನಾಯಕ ವಿದ್ಯಾರ್ಥಿ ನಿಲಯದಲ್ಲಿ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಶ್ರೀಗಳ ಸಾನ್ನಿಧ್ಯದಲ್ಲಿ ಕರೆಯಲಾಗಿದೆ.

ಇದೇ ದಿನಾಂಕ ಮಧ್ಯಾಹ್ನ 1 ಗಂಟೆಗೆ ಹರಪನಹಳ್ಳಿ ಮತ್ತು ಸಾಯಂಕಾಲ 4ಕ್ಕೆ ಹೂವಿನ ಹಡಗಲಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.

error: Content is protected !!