ಸಂಚಾರ ನಿಯಮ ಉಲ್ಲಂಘನೆ ಡಿವೈಡರ್ ತೆರವು ಮಾಡಲು ಮನವಿ

ದಾವಣಗೆರೆ, ನ.12- ನಗರದ ಪಿ. ಬಿ. ರಸ್ತೆ  ರೇಣುಕಾ ಮಂದಿರ ಎದುರು  ಸಂಚಾರ ನಿಯಮ‌ ಉಲ್ಲಂಘನೆ ಹೆಚ್ಚಾಗಿದೆ.   ಇಲ್ಲಿರುವ ಡಿವೈಡರ್  ಅನ್ನು  ತ್ವರಿತವಾಗಿ ತೆರವು ಮಾಡಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ವಹಿಸ ಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್ ಮನವಿ ಮಾಡಿದ್ದಾರೆ.  

ಕಳೆದ ಕೆಲವು ತಿಂಗಳ ಹಿಂದೆ ಅಪಘಾತವಾಗಿ ಸಾವಾಗಿತ್ತು ಎಂಬ ಒಂದೇ ಕಾರಣಕ್ಕೆ ಪೊಲೀಸ್ ‌ಇಲಾಖೆ ಡಿವೈಡರ್  ಅಳವಡಿಸಿದ ಕಾರಣ  ಶಾಲಾ ಮಕ್ಕಳು, ವರ್ತಕರಿಗೆ, ಅಂಗಡಿ ಮಾಲೀಕರಿಗೆ, ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿದೆ. 

ಇದರ ಜೊತೆಗೆ ಪೊಲೀಸ್ ಇಲಾಖೆಯ ಸಂಚಾರ ನಿರ್ವಹಣೆ ಮಾಡುವ ‌ಸಿಬ್ಬಂದಿಗಳಿಗೂ ಇಲ್ಲಿ ಸಂಚಾರ ನಿರ್ವಹಣೆ ಮಾಡುವುದು ಸವಾಲಾಗಿದೆ.ಹರಿಹರ ಕಡೆಯಿಂದ ಬರುವ ಸಾರಿಗೆ ಹಾಗೂ ಖಾಸಗಿ ಬಸ್‌ಗಳು ಆರ್. ಹೆಚ್. ವೃತ್ತದ ಪಕ್ಕದ ರಸ್ತೆಯಲ್ಲಿ ಗಾಂಧಿ ವೃತ್ತದ ಮೂಲಕ ಜಯದೇವ ಸರ್ಕಲ್ ಕಡೆಯಿಂದ ಕೋರ್ಟ್  ರಸ್ತೆಯ ಮೂಲಕ ಸುತ್ತು ಹೊಡೆದು ಬಸ್ ನಿಲ್ದಾಣಕ್ಕೆ ಬರುತ್ತಿವೆ. ಅಲ್ಲದೇ ಸಮಯವಾಗಿದೆ ಎಂದು ಕೆಲವು ಸಾರಿಗೆ ಬಸ್‌ಗಳು ಅರುಣ ವೃತ್ತದ ಬಲ ಭಾಗ ಒಮ್ಮುಖವಾಗಿ ಚಲಿಸಿ ಬಸ್ ನಿಲ್ದಾಣಕ್ಕೆ ಹೋಗುತ್ತಿವೆ. ಇದರಿಂದ ಅಪಘಾತವಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಹಾಗಾಗಿ  ಡಿವೈಡರ್  ಅನ್ನು    ತೆರವು ಮಾಡಿ  ಸುಗಮ ಸಂಚಾರಕ್ಕೆ  ಅನುಕೂಲ ಮಾಡಿಕೊಡುವಂತೆ ಶ್ರೀಕಾಂತ್ ಒತ್ತಾಯಿಸಿದ್ದಾರೆ. 

error: Content is protected !!