ನಾಡಿದ್ದು ಡಾ. ಅನುರಾಧ ಅವರ ‘ಒಲೆಯೊಳಗಣ ಕಿಚ್ಚು’ ಕೃತಿ ಬಿಡುಗಡೆ

ನಾಡಿದ್ದು ಡಾ. ಅನುರಾಧ ಅವರ ‘ಒಲೆಯೊಳಗಣ ಕಿಚ್ಚು’ ಕೃತಿ ಬಿಡುಗಡೆ

ದಾವಣಗೆರೆ, ನ.12- ನಿವೃತ್ತ ಪ್ರಾಧ್ಯಾಪಕರಾದ ಡಾ. ಅನುರಾಧ ಪಿ.ಎಂ. ಅವರ ಚೊಚ್ಚಲ ಕೃತಿ `ಒಲೆಯೊಳಗಣ ಕಿಚ್ಚು ‘ ಬಿಡುಗಡೆ ಸಮಾರಂಭವು ಇದೇ ದಿನಾಂಕ 16ರ ಗುರುವಾರ ಬೆಳಗ್ಗೆ 10.30ಕ್ಕೆ ಎವಿಕೆ ಕಾಲೇಜಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ನಡೆಯಲಿದೆ.

ಮೈಸೂರಿನ ಸಂಸ್ಕೃತಿ ಪ್ರಕಾಶನ, ಎವಿ ಕಮಲಮ್ಮ ಮಹಿಳಾ ಪದವಿ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿದೆ. ಹಿರಿಯ ಕವಯತ್ರಿ ಸವಿತಾ ನಾಗಭೂಷಣ ಕೃತಿಯನ್ನು ಲೋಕಾರ್ಪಣೆ ಗೊಳಿಸುವರು.  ಹಿರಿಯ ಸಾಹಿತಿ ಚಂದ್ರಶೇಖರ್ ತಾಳ್ಯ ಕೃತಿ ಕುರಿತು ಮಾತನಾಡುವರು ಎಂದು ಡಾ. ಅನುರಾಧ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಮೈಸೂರಿನ ಸಂಸ್ಕೃತಿ ಪ್ರಕಾಶನದ  ಸುಬ್ರಹ್ಮಣ್ಯ, ಎ.ವಿ.ಕೆ ಕಾಲೇಜಿನ ಪ್ರಾಂಶುಪಾಲರಾದ ಕಮಲಾ ಸೊಪ್ಪಿನ್ ಭಾಗವಹಿಸಲಿದ್ದಾರೆ. ಚನ್ನಬಸವನಗೌಡ,
ಡಾ.ರಣಧೀರ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!