ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ

ಅಂತರ್ ವಿಶ್ವವಿದ್ಯಾಲಯ  ಕಬಡ್ಡಿ ಪಂದ್ಯಾವಳಿಗೆ ಆಯ್ಕೆ

ದಾವಣಗೆರೆ, ನ. 7 – ನಗರದ ಎ.ಆರ್.ಎಂ.ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಕೆ.ಹೆಚ್. ರಮೇಶ್ ಮತ್ತು ಎನ್. ಜಿತೇಂದ್ರನಾಯ್ಕ  ಎಂಬ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ವತಿಯಿಂದ ಅಂತರ್ ವಿಶ್ವ ವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ನಂತರ ಆಂಧ್ರ ಪ್ರದೇಶದ ಜವಾಹರಲಾಲ್ ನೆಹರು ಟೆಕ್ನಿಕಲ್ ವಿಶ್ವವಿದ್ಯಾಲಯ, ಕಾಕಿನಾಡು ಇಲ್ಲಿ ನಡೆಯುವ ಅಂತರ್ ವಿಶ್ವವಿದ್ಯಾಲಯ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಆಡಳಿತ ಮಂಡಳಿ, ಪ್ರಾಂಶುಪಾಲ ಎಂ.ಡಿ. ಅಣ್ಣಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ್ ವಿ. ದಮ್ಮಳ್ಳಿ, ಐಕ್ಯೂಎಸಿ ಸಂಚಾಲಕ ಡಿ. ಅಂಜಿನಪ್ಪ ಅಭಿನಂದಿಸಿದ್ದಾರೆ.

error: Content is protected !!