ದಾವಣಗೆರೆ, ನ.2- ಆಕಾಶವಾಣಿ ಭದ್ರಾವತಿಯಿಂದ ನವೆಂಬರ್ ತಿಂಗಳ ಪ್ರತಿದಿನ ಬೆಳಿಗ್ಗೆ 9.35 ಗಂಟೆಗೆ `ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ’ ಕಾರ್ಯಕ್ರಮ ಸರಣಿಯನ್ನು ಆಕಾಶವಾಣಿ ಭದ್ರಾವತಿ FM103.5 ಹಾಗೂ MW675Khz ಯಲ್ಲಿ ಪ್ರಸಾರವಾಗಲಿದೆ. ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹೊರನಾಡ ಕನ್ನಡಿಗರು ಭಾಗವಹಿಸಬಹುದಾಗಿದ್ದು, ತಮ್ಮ ಕನ್ನಡ ಪ್ರೀತಿಯ ಅನಿಸಿಕೆಯ ಧ್ವನಿಮುದ್ರಿಸಿ ಇ-ಮೇಲ್ [email protected] ಗೆ ಕಳುಹಿಸಬಹುದು ಎಂದು ಆಕಾಶವಾಣಿ ಭದ್ರಾವತಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್ ಭಟ್ ತಿಳಿಸಿದ್ದಾರೆ.
July 24, 2024