`ಮೇರಾ ಮಿಟ್ಟಿ ಮೇರಾ ದೇಶ್‌’ ಅಭಿಯಾನದಲ್ಲಿ ಸಿದ್ಧಗಂಗಾ ಮಹೇಶ್

`ಮೇರಾ ಮಿಟ್ಟಿ ಮೇರಾ ದೇಶ್‌’ ಅಭಿಯಾನದಲ್ಲಿ ಸಿದ್ಧಗಂಗಾ ಮಹೇಶ್

ದಾವಣಗೆರೆ, ನ. 1- ದೆಹಲಿಯ ವಿಜಯ್‌ ಚೌಕ್‌ನಲ್ಲಿ  ಮೊನ್ನೆ ಆಯೋಜಿಸಲಾಗಿದ್ದ ಮೇರಾ ಮಿಟ್ಟಿ – ಮೇರಾ ದೇಶ್‌, ಅಮೃತ ಕಲಶ ಯಾತ್ರೆ ಹಾಗೂ  ರನ್‌ ಫಾರ್‌ ಯೂನಿಟಿ ಕಾರ್ಯಕ್ರಮದಲ್ಲಿ ನಗರದ ಸಿದ್ಧಗಂಗಾ ಸಂಸ್ಥೆಯ ಸ್ಕೌಟ್‌ ಮಾಸ್ಟರ್‌ ಹಾಗೂ ಸಿದ್ಧಗಂಗಾ ಸ್ಕೌಟ್‌ ಮತ್ತು ಗೈಡ್‌ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಸಿ. ಮಹೇಶ್‌ ಭಾಗವಹಿಸಿದ್ದಾರೆ. 

ಕರ್ತವ್ಯದಲ್ಲಿ ತ್ಯಾಗ-ಬಲಿದಾನ ಮಾಡಿದ ಯೋಧರ ಗೌರವಾರ್ಥ ಏರ್ಪಡಿಸಿರುವ ಈ ಕಾರ್ಯಕ್ರಮಕ್ಕೆ ದೇಶದಾದ್ಯಂತದಿಂದ ಸಹಸ್ರಾರು ಅಮೃತ ಕಲಶ ಯಾತ್ರಿಗಳು ಭಾಗವಹಿಸಿದ್ದರು.

ಮಹಾನಗರ ಪಾಲಿಕೆ ವತಿಯಿಂದ ಆಯ್ಕೆಯಾಗಿ ನಗರದ ಜನತೆಯ ಪರವಾಗಿ ಅಮೃತ ಕಲಶವನ್ನು ಸಮರ್ಪಿಸುವ ಅವಕಾಶ ನೀಡಿದ್ದಕ್ಕಾಗಿ ಸಿದ್ಧಗಂಗಾ ಸಂಸ್ಥೆಯು ದಾವಣಗೆರೆ ಮಹಾನಗರ ಪಾಲಿಕೆಗೆ ಕೃತಜ್ಞತೆ ಸಲ್ಲಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್.‌ ಹೇಮಂತ್‌ ತಿಳಿಸಿದ್ದಾರೆ.

error: Content is protected !!