ಹರಿಹರದಲ್ಲಿ ಇಂದು ರಾಜ್ಯೋತ್ಸವ

ಹರಿಹರ ತಾಲ್ಲೂಕು ಆಡಳಿತದಿಂದ ಗಾಂಧಿ ಮೈದಾನದಲ್ಲಿ ಇಂದು ಬೆಳಿಗ್ಗೆ 9 ಗಂಟೆಗೆ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭವು ಶಾಸಕ ಬಿ.ಪಿ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.  ಧ್ವಜಾರೋಹಣ ವನ್ನು ತಹಶೀಲ್ದಾರ್ ಪೃಥ್ವಿ ಸಾನಿಕಂ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಎಸ್. ಮಲ್ಲಿಕಾರ್ಜುನ್, ಜಿ.ಎಂ. ಸಿದ್ದೇಶ್ವರ, ಕೆ.ಅಬ್ದುಲ್ ಜಬ್ಬಾರ್,  ನಿಂಬಕ್ಕ ಚಂದಪೂರ್, ಡಿ.ಎಂ. ಮಂಜುನಾಥಯ್ಯ ಇತರರು ಭಾಗವಹಿಸಲಿದ್ದು, ಹನಗವಾಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸುರೇಶ್ ಹಂಚಿನಗೌಡ್ರು ಉಪನ್ಯಾಸ ಭಾಷಣ ಮಾಡಲಿದ್ದಾರೆ.

error: Content is protected !!