ನಗರದಲ್ಲಿ ಇಂದು ನಿರುದ್ಯೋಗಿ ಕಲಾವಿದರಿಗೆ ಉದ್ಯೋಗ, ವಿಚಾರಗೋಷ್ಠಿ

ದಾವಣಗೆರೆ, ಅ.31- ಎ.ಐ.ಎಂ. ಅಕಾಡೆಮಿ ವತಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರುನಾಡ ನಟರಾಜ ವಿಚಾರಗೋಷ್ಠಿ, ನಿರುದ್ಯೋಗಿ ಕಲಾವಿದರಿದೆ ಉದ್ಯೋಗಾವಕಾಶ ನೀಡುವ ಕಾರ್ಯಕ್ರಮವನ್ನು ಶಿರಮಗೊಂಡನಹಳ್ಳಿಯ ಸುಧಾ ವೀರೇಂದ್ರ ಪಾಟೀಲ್ ಸಮುದಾಯಭವನದಲ್ಲಿ  ನಾಳೆ ದಿನಾಂಕ 1ರ ಬುಧಾರ ಹಮ್ಮಿಕೊಳ್ಳಲಾಗಿದೆ.

ಎ.ಐ.ಎಂ. ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಜ್ ಯಾಧವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸುತ್ತಾ, ಅಂದು ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವಕ್ತಾರ ರತನ್, ಕಲಾವಿದ ಡಿ. ಗಿರೀಶ್ ಆಗಮಿಸಲಿದ್ದಾರೆ. ಪ್ರವೇಶ ಉಚಿತವಾಗಿದೆ.  

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿಯ ಸಿಇಒ ಕೆ.ಶಿವಕುಮಾರ್, ವೀರೇಶ್, ಶೃತಿ, ಮಹೇಶ್ ಇದ್ದರು.

error: Content is protected !!