ನಗರದಲ್ಲಿ ಇಂದಿನ ಬ್ಯಾಂಕ್ ನೌಕರರ ಸಭೆ

ನಗರದಲ್ಲಿ ಇಂದಿನ ಬ್ಯಾಂಕ್ ನೌಕರರ ಸಭೆ

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು (ಎಐಬಿಇಎ) ಬ್ಯಾಂಕ್‌ಗಳಲ್ಲಿ ಅಗತ್ಯವಿರುವ ನೇಮಕಾತಿಗೆ ಒತ್ತಾಯಿಸಿ, ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು-ಅನುಷ್ಠಾನಗೊಳಿಸಲು ಒತ್ತಾಯಿಸಿ ಮತ್ತು ಬ್ಯಾಂಕ್ ಉದ್ಯೋಗಗಳ ಹೊರಗುತ್ತಿಗೆ ನೀಡುವುದನ್ನು ವಿರೋಧಿಸಿ ಸೆಪ್ಟೆಂಬರ್ 2023 ರಿಂದ ಜನವರಿ 2024 ರವರೆಗೆ ಸುದೀರ್ಘ ಅವಧಿಯ  ಹೋರಾಟವನ್ನು ಹಮ್ಮಿಕೊಂಡಿದೆ ಎಂದು ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ತಿಳಿಸಿದ್ದಾರೆ. ಈ ಹೋರಾಟದ ಭಾಗವಾಗಿ  ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್ ಜಿಲ್ಲಾವಾರು ಸದಸ್ಯರ ಸಭೆಯನ್ನು ಆಯೋಜಿಸಲು ಕರೆ ನೀಡಿದ್ದು,  ಇಂದು ಬೆಳಿಗ್ಗೆ 10.30 ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಸದಸ್ಯರ ಸಭೆ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಪೆಡರೇಶನ್‌ನ  ಜಂಟಿ ಕಾರ್ಯದರ್ಶಿ ಸ್ಟೀಫನ್ ಜಯಚಂದ್ರ ಆಗಮಿಸುವರು.

error: Content is protected !!