ದಾವಣಗೆರೆ, ಅ. 20- ಸ್ಥಳೀಯ ಕೆಟಿಜೆ ನಗರ, ಮೂರನೇ ಮುಖ್ಯ ರಸ್ತೆ, 11 ಮತ್ತು 12ನೇ ತಿರುವಿನಲ್ಲಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 22ರ ಭಾನುವಾರ ಮುಂಜಾನೆ ದುರ್ಗಾಷ್ಟಮಿಯಂದು ಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಚಂಡಿಕಾ ಹೋಮದಲ್ಲಿ ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ದೇವಸ್ಥಾನದಲ್ಲಿ ಹೆಸರು ನೋಂದಾಯಿಸಬಹುದು. ದಿನಾಂಕ 23ರ ಸೋಮವಾರ ಆಯುಧ ಪೂಜೆ, ದಿ. 24ರ ಮಂಗಳವಾರ ಸಂಜೆ 4.30ಕ್ಕೆ ಬನ್ನಿ ಮುಡಿಯುವುದು, ಅಂಬುಛೇದನ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
July 24, 2024