ನಗರದಲ್ಲಿ ಇಂದು ‘ಪಾಕ ಪರಿಷೆ’

ದಾವಣಗೆರೆ, ಅ.19- ನಗರದ ಚಾಣುಕ್ಯ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಾಳೆ ದಿನಾಂಕ  20 ರಂದು ಮಧ್ಯಾಹ್ನ 12 ರಿಂದ ಸಂಜೆ 5 ರವರೆಗೆ `ಚಾಣುಕ್ಯ ಪಾಕ ಪರಿಷೆ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಯೋಜನಾ ಸಂಘಟಕರಾದ ಕೆ.ಪಿ ಕವನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್.ಎಸ್.ಕೇರ್ ಟ್ರಸ್ಟ್ ಲೈಫ್ ಟ್ರಸ್ಟೀ ಡಾ. ಪ್ರಭಾ ಮಲ್ಲಿಕಾರ್ಜುನ್, ಎಸ್ಪಿ ಉಮಾ ಪ್ರಶಾಂತ್ ಚಾಣುಕ್ಯ ಪರಿಷೆಗೆ ಚಾಲನೆ ನೀಡಲಿದ್ದಾರೆ. ಚಾಣುಕ್ಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಿ.ವಿ. ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ಕುಲಸಚಿವ ಡಾ. ಕೆ. ಶಿವಶಂಕರ್, ಬೆಂಗಳೂರು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ, ನಿರ್ದೇಶಕ ಜಿ.ಬಿ. ವಿನಯ್ ಕುಮಾರ್, ಕಾಲೇಜಿನ ಪ್ರಾಚಾರ್ಯ ಕೆ.ರಾಜಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ.

ಕಾಲೇಜಿನ ಪ್ರಾಚಾರ್ಯ ಕೆ. ರಾಜಶೇಖರ್, ಡೀನ್ ಬಿ.ಆರ್.ಟಿ. ಸ್ವಾಮಿ, ಬಿ.ಎಸ್. ಅಮರೇಶ್, ಕೆ.ಪಿ. ಅಶ್ವಿನಿ, ಬಿ.ವಿ. ಶ್ರೀನಾಥ್, ಲಕ್ಷ್ಮೀ, ಸಿಂಚನ, ಜಾಫರ್ ಅಲಿ, ವಿಶ್ವಾಸ್, ನಂದಿತಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

error: Content is protected !!