ರಾಣೇಬೆನ್ನೂರು: ಕೆಸಿಸಿ ಚುನಾವಣೆ ಕಾಂಗ್ರೆಸ್‌ನ ತಿರುಪತಿಗೆ ಭರ್ಜರಿ ಜಯ

ರಾಣೇಬೆನ್ನೂರು: ಕೆಸಿಸಿ ಚುನಾವಣೆ  ಕಾಂಗ್ರೆಸ್‌ನ ತಿರುಪತಿಗೆ ಭರ್ಜರಿ ಜಯ

ರಾಣೇಬೆನ್ನೂರು,ಅ.18- ಅವಿಭಜಿತ ಧಾರವಾಡ ಜಿಲ್ಲೆಯ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿಯ ಕೆಸಿಸಿ ಬ್ಯಾಂಕ್ ಪ್ರತಿನಿಧಿ ಚುನಾವಣೆಯಲ್ಲಿ ಒಟ್ಟು 18 ಮತಗಳಲ್ಲಿ ಕಾಂಗ್ರೆಸ್ ಬೆಂಬಲಿತ ರಾಣೇಬೆನ್ನೂರಿನ ತಿರುಪತಿ ಅಜ್ಜನವರ  11ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. 

ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಸವಣೂರಿನ ಶರಣಪ್ಪಗೌಡ ಅವರು 7 ಮತಗಳನ್ನು ಪಡೆದು ಪರಾಜಿತರಾದರು.

ಚುನಾವಣೆಯಲ್ಲಿ ತಮ್ಮ ಆಯ್ಕೆಗೆ ಶ್ರಮಿಸಿದ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಸೇರಿದಂತೆ ಕ್ಷೇತ್ರದ   ಕಾಂಗ್ರೆಸ್ ಶಾಸಕರು ಹಾಗೂ  ಮುಖಂಡರಿಗೆ ತಿರುಪತಿ   ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!