ಜಗಳೂರು; ಸೋಲಾರ್ ದೀಪ ಅಳವಡಿಕೆ ಗ್ರಾಪಂ ಉಪಾಧ್ಯಕ್ಷೆಯ ಮೇಲೆ ಹಲ್ಲೆ

ಜಗಳೂರು, ಅ.17- ಸೋಲಾರ್ ದೀಪ ಅಳವಡಿಸುವ ವಿಚಾರವಾಗಿ ಗ್ರಾಮ ಪಂಚಾಯಿ ತಿಯ ಉಪಾಧ್ಯಕ್ಷೆ  ನಿಂಗಮ್ಮ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. 

ಹೊಸಕೆರೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಚಿಕ್ಕಬನ್ನಿಹಟ್ಟಿ ಗ್ರಾಮದಲ್ಲಿ ಪಂಚಾಯಿತಿಯ ವತಿಯಿಂದ ಸೋಲಾರ್ ದೀಪ ಅಳವಡಿಸಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡ ಮಾರಪ್ಪ, ನಮ್ಮ ಮನೆಯ ಮುಂದೆ ಸೋಲಾರ್ ದೀಪ ಅಳವಡಿ ಸಬೇಕು, ಇಲ್ಲದಿದ್ದರೆ ಎಲ್ಲಾ ಕಂಬಗಳನ್ನು ಮುರಿದು ಹಾಕುತ್ತೇನೆ ಎಂದು ಉಪಾಧ್ಯಕ್ಷೆ ನಿಂಗಮ್ಮ ಅವರೊಂದಿಗೆ ಜಗಳವಾಡಿದ್ದಾನೆ. 

ನಂತರ ಮನೆಯಲ್ಲಿ ಒಂಟಿ ಇರುವಾಗ ಏಕಾಏಕಿ ನುಗ್ಗಿದ ಮಾರಪ್ಪ ನಿಂಗಮ್ಮಳನ್ನು ಹಿಗ್ಗಾಮುಗ್ಗಾ ಹೊಡೆದು ಹಲ್ಲೆ ಮಾಡಿದ್ದಾನೆ. ಅಲ್ಲದೇ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ.  ಗಾಯಗೊಂಡಿದ್ದ ಉಪಾಧ್ಯಕ್ಷೆ ನಿಂಗಮ್ಮ ಅವರನ್ನು ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ  ಕೊಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!