ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿಗೆ ಇಂದು ಮಹಾನವಮಿ ಅಮಾವಾಸ್ಯೆ ಪ್ರಯುಕ್ತ ಅಭಿಷೇಕ, ಅಲಂಕಾರ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
ಬೇತೂರು ಶ್ರೀಮತಿ ಪುಷ್ಪಲತಾ ಕರಿಬಸಪ್ಪ, ಮಗ ಸೋಮಶೇಖರ ಮತ್ತು ಕುಟುಂಬದವರು, ದೇವರಮನಿ ಚನ್ನಬಸಮ್ಮ ಮುರಿಗೆಪ್ಪ ಇವರ ನೆನಪಿಗಾಗಿ ದೇವರಮನಿ ಶ್ರೀಮತಿ ರತ್ನಮ್ಮ ಮಹಾ ರುದ್ರಪ್ಪ ಮತ್ತು ಮಕ್ಕಳು ಹಾಗೂ ಕುಟುಂಬದವರು, ದಿ. ಚನ್ನವೀರಪ್ಪ (ನಿವೃತ್ತ ಶಿಕ್ಷಕರು) ಎನ್.ಪಿ. ಇವರ ಸ್ಮರಣಾರ್ಥವಾಗಿ ಶ್ರೀಮತಿ ಜಿ.ಇ. ನಾಗರತ್ನಮ್ಮ ಮತ್ತು ಕುಟುಂಬದವರು ದಾಸೋಹ ಸೇವಾಕರ್ತರಾಗಿದ್ದಾರೆ.