ಕೋಡಿ ಕ್ಯಾಂಪ್‌ನಲ್ಲಿನ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ನಾಳೆ ಅಮಾವಾಸ್ಯೆ

ದಾವಣಗೆರೆ, ಅ. 12 – ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಾಗಾನಹಳ್ಳಿ ಕೋಡಿ ಕ್ಯಾಂಪ್‌ ಬಳಿ ಇರುವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 14ರ ಶನಿವಾರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ 7 ರಿಂದ 9ರವರೆಗೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಪ್ರಸಾದ ದಾಸೋಹ ನಡೆಯಲಿದೆ.

ಸದ್ಭಕ್ತರು ಭಾಗವಹಿಸುವಂತೆ ದೇವಸ್ಥಾನ ಸಮಿತಿಯ ಕಣಕುಪ್ಪಿ ಮುರುಗೇಶಪ್ಪ (96118 89151), ಟಿ.ಜಿ. ಬಕ್ಕೇಶಪ್ಪ (91089 88898), ಬಿ.ಚಿದಾನಂದಪ್ಪ (98445 28449), ಮಲ್ಲಾಬಾದಿ ಗುರುಬಸವರಾಜ್‌ (79757 97079) ತಿಳಿಸಿದ್ದಾರೆ. ದಾಸೋಹ ಮನೆ ಮತ್ತು ಸಭಾಂಗಣ ಕಟ್ಟಡವು ಪ್ರಗತಿ ಹಂತದಲ್ಲಿದೆ. ಭಕ್ತಾದಿಗಳು ದೇಣಿಗೆ ಸಲ್ಲಿಸಲು ಕೋರಿದೆ.

error: Content is protected !!