ನಗರದಲ್ಲಿ ಇಂದು ಲೋಕ ಕಲಾಯಾತ್ರೆ

ದಕ್ಷಿಣ ಮಧ್ಯ ಕ್ಷೇತ್ರ ಸಾಂಸ್ಕೃತಿಕ ಕೇಂದ್ರ ನಾಗಪುರ, ಕರ್ನಾಟಕದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ದಾವಣಗೆರೆ ತಾ, ಜಿಲ್ಲೆ ಹಾಗೂ ಎಸ್‌.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಅಥಣಿ ಪಿ.ಜಿ. ಸೆಂಟರ್‌ ಇವರುಗಳ ಸಂಯುಕ್ತಾಶ್ರ ಯದಲ್ಲಿ ಲೋಕ ಕಲಾ ಯಾತ್ರ ಕಾರ್ಯಕ್ರಮ ಇಂದು ಬೆಳಿಗ್ಗೆ 10.30 ಗಂಟೆಗೆ ಎಸ್‌.ಬಿ.ಸಿ. ಕಾಲೇಜು ಮತ್ತು ಅಥಣಿ ಪಿ.ಜಿ. ಸೆಂಟರ್‌ನ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಅಧ್ಯಕ್ಷತೆಯನ್ನು  ಅಥಣಿ ವೀರಣ್ಣ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್‌, ಗೋಪಾಲ್ ಬೆಟಾವರ್‌ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಎನ್‌.ಎ. ಮುರಿಗೇಶ್‌, ಬಿ.ಸಿ. ಉಮಾಪತಿ, ರವಿಚಂದ್ರ, ಮಾಗಾನಹಳ್ಳಿ ಮಂಜುನಾಥ್‌ ಆಗಮಿಸುವರು. ಎಸ್‌ಬಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

error: Content is protected !!