ನಗರದಲ್ಲಿ ಇಂದು ನೇತಾಜಿ ಸ್ಕೌಟ್ಸ್ ಗ್ರೂಪ್, ಚೇತನಾ ಗೈಡ್ ಗ್ರೂಪ್‌ `ರಜತ ವೈಭವ’

ದಾವಣಗೆರೆ, ಅ.11- ನೇತಾಜಿ ಓಪನ್ ಸ್ಕೌಟ್ಸ್ ಗ್ರೂಪ್ ಮತ್ತು ಚೇತನಾ ಗೈಡ್ ಗ್ರೂಪ್‌ನ  `ರಜತ ವೈಭವ’ 25ನೇ ವಾರ್ಷಿಕೋತ್ಸವ ಸಮಾರಂಭವನ್ನು ನಾಳೆ ದಿನಾಂಕ 12 ಹಾಗೂ 13ರಂದು ಪಿ.ಜೆ. ಬಡಾವಣೆಯ ಬಾಪೂಜಿ ಕೇಂದ್ರೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ವಲಯ ಸ್ಥಳೀಯ ಸಂಸ್ಥೆ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 12ರಂದು ಸಂಜೆ 5.30ಕ್ಕೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ. ಆರ್. ಸಿಂಧ್ಯಾ ಸಮಾರಂಭ ಉದ್ಘಾಟಿಸಲಿದ್ದಾರೆ. ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ. ಚಿಗಟೇರಿ, ಎಸ್.ಎಸ್. ಕೇರ್ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯೋಪಾಧ್ಯಾ ಯರಾದ ಜಸ್ಟಿನ್ ಡಿಸೌಜ ಯಶಸ್ಸು ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ಸಂಘಟನಾ ಆಯುಕ್ತ ಪುರಷೋತ್ತಮ್ ಲಾಲ್ ದೂಬೆ, ರಾಜಸ್ಥಾನದ  ಮುಖೇಶ್ ಜಿ ಉಪಸ್ಥಿತರಿರಲಿದ್ದಾರೆ.

ದಿ.13ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಡಿ. ಬಸವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಿಡಿಪಿಐ ಜಿ.ಕೊಟ್ರೇಶ್, ಬಾಪೂಜಿ ವಿದ್ಯಾಸಂಸ್ಥೆ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ, ವಿಜಯ್ ಕುಮಾರ್ ಮಿಶ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯದರ್ಶಿ ಜೆ.ಎಸ್. ವಿಜಯ್, ಕಾವೇರಿ ವಿಜಯ್, ಶಿವಮೂರ್ತಿ, ಗಜೇಂದ್ರ, ಸಂತೋಷ್ ಏಕಬೋಟೆ, ದಿಳ್ಯೆಪ್ಪ, ರಾಮಮೂರ್ತಿ ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!