ದಾವಣಗೆರೆ, ಅ.10- ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿ 50 ವರ್ಷ ಪೂರ್ಣಗೊಳ್ಳಲಿದ್ದು, ಇದರ ಅಂಗವಾಗಿ `ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಶೀರ್ಷಿಕೆಯಡಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಚನ ಮಾದರಿಯನ್ನು ಸರ್ಕಾರ ಆಹ್ವಾನಿಸಿದೆ. ಇದು ಸ್ವಾಗತಾರ್ಹವಾಗಿದೆ ಎಂದು ಹೆಲ್ಪ್ ಲೈನ್ ಸುಭಾನ್ ತಿಳಿಸಿದ್ದಾರೆ.
ಆದರೆ ಕರ್ನಾಟಕ ಸರ್ಕಾರದ ಲಾಂಚನದಲ್ಲಿ `ಸತ್ಯಮೇವ ಜಯತೆ’ ಎನ್ನುವ ಸೂಕ್ತಿಯು ಕನ್ನಡೇತರ ಭಾಷೆಯಲ್ಲಿ ಮುದ್ರಿತವಾಗಿದೆ. ಇದನ್ನು ಮೊದಲು ಸರಿಪಡಿಸಬೇಕಾಗಿದೆ. ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಬುದ್ದಿ ಜೀವಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಮತ್ತು ಇತಿಹಾಸಕಾರರನ್ನು ಒಳಗೊಂಡ ಸರ್ಕಾರಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ಸುಭಾನ್ ಒತ್ತಾಯಿಸಿದ್ದಾರೆ.