ಇಸ್ರೇಲ್ ದೇಶದಲ್ಲಿರುವವರಿಗೆ ಸಹಾಯವಾಣಿ

ದಾವಣಗೆರೆ, ಅ. 9 – ಇಸ್ರೇಲ್ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ಇಸ್ರೇಲ್ ದೇಶಕ್ಕೆ ಹೋಗಿರುವ ಮತ್ತು ಅಲ್ಲಿ ವಾಸವಾಗಿರುವ  ದಾವಣಗೆರೆ ಜಿಲ್ಲೆಯ ಪ್ರಜೆಗಳಿದ್ದಲ್ಲಿ, ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞರ ದೂ. ಸಂ. 63613 82915  ಅಥವಾ ರಾಜ್ಯ ಸರ್ಕಾರದ ತುರ್ತು ದೂ. ಸಂ. 080-2234067 ಮತ್ತು 080-2225 3707 ಗೆ ಸಂಪರ್ಕಿಸಿ ಅವರ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

error: Content is protected !!