ದಾವಣಗೆರೆ,ಅ.8- ವಕೀಲರ ಸಮುದಾಯಕ್ಕೆ ಸೇರದ, ವಕೀಲ ವೃತ್ತಿಗೆ ಸಂಬಂಧವಿರದ ವ್ಯಕ್ತಿಗಳು ತಮ್ಮ ವಾಹನಗಳ ಮೇಲೆ ವಕೀಲರ `ಸಿಂಬಲ್’ ಅನ್ನು ಅನಧಿಕೃತವಾಗಿ ಬಳಸುತ್ತಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಕಾನೂನು ಪ್ರಕೋಷ್ಟ ಒತ್ತಾಯಿಸಿದೆ.
ಹೀಗೆ ವಕೀಲ ವೃತ್ತಿಗೆ ಸಂಬಂಧವಿರದ ವ್ಯಕ್ತಿಗಳು ಸಿಂಬಲ್ ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಇಂತಹ ನಕಲಿ ವಕೀಲರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಬಿಜೆಪಿ ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ ಮತ್ತು ಜಿಲ್ಲಾ ಸಂಚಾಲಕ ಹೆಚ್. ದಿವಾಕರ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಹಕಾರ ಸಂಘದ ನಿರ್ದೇಶಕ ಎ.ಕೆ. ಹಾಲಪ್ಪ, ಉತ್ತರ ವಿಧಾನಸಭಾ ಕ್ಷೇತ್ರದ ಸಂಚಾಲಕ ಪಿ.ವಿ.ಶಿವಕುಮಾರ್ ಹಾಗೂ ನೋಟರಿ ನೀಲಕಂಠಯ್ಯ ಹಾಜರಿದ್ದರು.