ಸಾಕ್ಷರತಾ ಸಮಿತಿ ಕಾರ್ಯದರ್ಶಿ ಡಾ. ಐ.ಎ. ಲೋಕಾಪುರ ನಿಧನ

ಸಾಕ್ಷರತಾ ಸಮಿತಿ ಕಾರ್ಯದರ್ಶಿ ಡಾ. ಐ.ಎ. ಲೋಕಾಪುರ ನಿಧನ

ಹರಿಹರ, ಅ. 6- ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಕ್ಕಳ ಸಾಹಿತ್ಯ ವೇದಿಕೆ ಕಾರ್ಯದರ್ಶಿ ಹಾಗೂ ಎರಡೂ ಜಿಲ್ಲೆಗಳ ಸಾಕ್ಷರತಾ ಸಮಿತಿಗಳ ಕಾರ್ಯದರ್ಶಿ ಡಾ. ಐ.ಎ. ಲೋಕಾಪುರ ಅವರು ಹಾವೇರಿಯಲ್ಲಿ ನಿನ್ನೆ ನಿಧನರಾದರು.

ಲೋಕಾಪುರ ಅವರ ಪೂರ್ಣ ಹೆಸರು  ಈರಣ್ಣ ಅಮರಪ್ಪ ಲೋಕಾಪುರ ಆಗಿದ್ದು, ಅವರು ಸಾಕ್ಷರತಾ ಸಮಿತಿಯಲ್ಲಿ ಅಪಾರವಾಗಿ ಶ್ರಮಿಸಿದ್ದರು. ದಾವಣಗೆರೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ವಿವಿಧ ಜಿಲ್ಲೆಗಳ ಸಾಕ್ಷರತಾ ಪ್ರಗತಿ ಹೆಚ್ಚಿಸಲು ಹಾಗೂ ಆದಾಪುರ ಗ್ರಾಮ ಆದರ್ಶಪುರವಾಗಲು ಕಾರಣರಾಗಿದ್ದರು. ಲೋಕಾಪುರ ನಿಧನಕ್ಕೆ ಸಾಮಾಜಿಕ ಕಾರ್ಯಕರ್ತೆ ಆಲಿಸ್ ಸಾಲೋಮನ್, ಅಕ್ಷರ ಕಾರ್ಯ ಕರ್ತರಾದ ಎಚ್.ಎಂ.ಸದಾನಂದ, ಸಿದ್ದಯ್ಯ ಒಡೆಯರ್, ಎಂ. ಶಿವಕುಮಾ ರ್, ಲೀಲಾ, ಜಯಲಕ್ಷ್ಮಿ, ವಾಸನ ಜಗದೀಶ್, ಶಿವಮೂರ್ತಿಸಿಂಗ್, ಮಹಾ ರುದ್ರಪ್ಪ ಮೆಣಸಿನಕಾಯಿ, ಸುಬ್ರಮಣ್ಯ ನಾಡಿಗೇರ್, ಕೆಂಚವೀರಪ್ಪ, ಲೋಕಿಕೆರೆ ಅಂಜಿನಪ್ಪ, ಬಾನಪ್ಪ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

error: Content is protected !!