ರಾಣೇಬೆನ್ನೂರಿನಲ್ಲಿ ಇಂದು ಗಾನಸಂಗಮ

ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 7ಕ್ಕೆ ಮಂಡ್ಯದ ಕಲಾಶ್ರೀ ಟ್ರಸ್ಟ್ ವತಿಯಿಂದ ಸಮಸ್ತ ಕಲಾಪ್ರೇಮಿಗಳ ಆಶ್ರಯದಲ್ಲಿ ಹಿರಿಯ ರಂಗಕಲಾವಿದ ವಿಕಲಚೇತನ ಜಿ.ಕೆ.ಶಂಕರ ಇವರ ವೈದ್ಯಕೀಯ ಚಿಕಿತ್ಸಾ ನೆರವಿಗಾಗಿ ಗಾನ ಸಂಗಮ ಕಾರ್ಯಕ್ರಮ‌ ನಡೆಯಲಿದೆ.

ಕಲಾವಿದರಾದ ಸುಬ್ರಮಣಿ, ನಾಗಮಂಗಲ ಶ್ರೀನಿವಾಸ, ಗೌರ ನಾಗರಾಜ, ಮಿಲ್ಕಿ ಮಂಜು, ಶಂಕರ ಆರ್, ಪ್ರಸನ್ನ ಎನ್., ಪ್ರೇಮಕುಮಾರಿ, ಚಂದನ ಎಸ್, ಮೇಘನ ಎಸ್, ಸಿಂಚನ ಎಸ್ ಅವರಿಂದ ಮಧುರ ಗೀತೆಗಳ ಗಾಯನ ನಡೆಯಲಿದೆ.

error: Content is protected !!