ಭರಮಸಾಗರದಲ್ಲಿ ಇಂದು ಮದ್ಯವರ್ಜನೆ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಸಿರಿಗೆರೆ, ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್‌ ಬೆಳ್ತಂಗಡಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಿಲ್ಲಾ ಜನಜಾಗೃತಿ ವೇದಿಕೆ ಚಿತ್ರದುರ್ಗ, ಮದ್ಯವರ್ಜನೆ ಶಿಬಿರದ ವ್ಯವಸ್ಥಾಪನಾ ಸಮಿತಿ ಭರಮಸಾಗರ ವಲಯ, ಗ್ರಾಮ ಪಂಚಾಯತಿ ಭರಮಸಾಗರ, ಪೊಲೀಸ್‌ ಇಲಾಖೆ ಭರಮಸಾಗರ, ಸಮುದಾಯ ಆರೋಗ್ಯ ಕೇಂದ್ರ ಭರಮಸಾಗರ, ಕಾರ್ಯನಿರತ ಪತ್ರಕರ್ತರ ವೇದಿಕೆ ಭರಮಸಾಗರ, ಭರಮಸಾಗರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ರೋಟರಿ ಕ್ಲಬ್‌, ಭರಮಸಾಗರ, ಸೆಲ್ಕೋ ಸೋಲಾರ್‌ ಲೈಟ್‌ ಪ್ರೈ ಲಿ. ಚಿತ್ರದುರ್ಗ, ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕ ಭರಮಸಾಗರ, ಪತಂಜಲಿ ಯೋಗ ಕೇಂದ್ರ ಭರಮಸಾಗರ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಭರಮಸಾಗರ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭರಮಸಾಗರ, ಶ್ರೀ ಪವಮಾನ ಪ್ರತಿಷ್ಠಾನ ಭರಮಸಾಗರ, ಗ್ರಾಮೀಣ ಸಿರಿ ಬಳಗ ಭರಮಸಾಗರ, ಬುಡರಾಳ್‌ ಶ್ರೀ ವೀರಾಂಜನೇಯ ಜೀರ್ಣೋದ್ಧಾರ ಸಮಿತಿ ಭರಮಸಾಗರ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಭರಮಸಾಗರ ಇವರುಗಳ ಸಂಯುಕ್ತಾಶ್ರಯದಲ್ಲಿ ಮದ್ಯವರ್ಜನೆ ಶಿಬಿರವನ್ನು ಇಂದಿನಿಂದ ಇದೇ ದಿನಾಂಕ 13  ರವರೆಗೆ ಭರಮಸಾಗರದಲ್ಲಿರುವ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 

ಶಿಬಿರದ ಉದ್ಘಾಟನಾ ಸಮಾರಂಭವನ್ನು ಇಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಸಚಿವ ಹೆಚ್‌. ಆಂಜನೇಯ ಉದ್ಘಾಟಿಸುವರು. ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಜಿ.ಬಿ. ತೀರ್ಥಪ್ಪ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ರಮೇಶ್‌ರಾವ್, ದಿನೇಶ್‌ ಪೂಜಾರಿ, ಡಿ.ವಿ. ಶರಣಪ್ಪ, ಹೆಚ್‌.ಎನ್‌. ತಿಪ್ಪೇಸ್ವಾಮಿ, ಶ್ರೀಮತಿ ರತ್ನಮ್ಮ, ಹೆಚ್‌.ಎನ್‌. ಕಿರಣ್‌, ಹೆಚ್‌.ಎಂ. ಮಂಜುನಾಥ್‌, ವೆಂಕಟೇಶ್‌ನಾಯ್ಕ, ಕೆ.ಆರ್. ಮಂಜುನಾಥ್‌, ಸಿ.ಟಿ. ಮಹಾಂತೇಶ್‌, ಕಲ್ಲೇಶ್, ಎಂ.ಎಸ್‌. ಆಶ್ರಫ್‌ಉಲ್ಲಾ, ಹೆಚ್‌.ಎಂ. ಶಿವಬಸಯ್ಯ ಆಗಮಿಸುವರು.

error: Content is protected !!