ನಗರದಲ್ಲಿಂದು ಸೈಕಲ್ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಚೇರಿಯಲ್ಲಿ ಇಂದು ಸಂಜೆ 5.30 ರಿಂದ 7ರವರೆಗೆ  ಗಾಂಧಿ ಜಯಂತಿ, ಬಡವರಿಗೆ ಸೈಕಲ್ ವಿತರಣೆ ಹಾಗೂ `ಮಾನವತಾವಾದಿ ಮಹಾತ್ಮಗಾಂಧಿ’ ವಿಷಯವಾಗಿ ಚಿಂತನೆ ಮತ್ತು ಸಂವಾದ ನಡೆಯಲಿದೆ.

ಚಿಂತಕರು:  ಸಾಹಿತಿ ಡಾ. ಎಂ.ಜಿ. ಈಶ್ವರಪ್ಪ, ಮುಖ್ಯ ಅತಿಥಿಗಳಾಗಿ ಬಸವರಾಜ್ ವಡೆಯರ್, ಸಿ.ಎನ್. ಜಯ ಪ್ರಕಾಶ್, ಕೆ.ಪಿ. ಪರಮೇಶ್ವರಪ್ಪ ಉಪಸ್ಥಿತರಿರುವರು. ಡಾ. ಹೆಚ್.ಎನ್. ಮಲ್ಲಿಕಾರ್ಜುನ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಭಾಗವಹಿಸುವವರು:  ಪ್ರೊ.ಎಂ.ಬಸವರಾಜ್,  ಎಸ್. ಗುರು ಮೂರ್ತಿ, ಆರ್.ಆರ್.ಕುಸ ಗೂರು, ಮಲ್ಲಾಬಾದಿ ಬಸ ವರಾಜ್, ಆವರಗೆರೆ ರುದ್ರ ಮುನಿ, ಕಲೀಂ ಭಾಷಾ, ಭಿಕ್ಷಾವರ್ತಿಮಠ್.

error: Content is protected !!