ವನಿತಾ ಸಮಾಜದಿಂದ ಇಂದು ಸರ್ವಧರ್ಮ ಪ್ರಾರ್ಥನೆ

ವನಿತಾ ಸಮಾಜದ ಆಶ್ರಯದಲ್ಲಿ 154ನೇ ಗಾಂಧಿ ಜಯಂತಿ ಆಚರಣೆ, ಸರ್ವಧರ್ಮ ಪ್ರಾರ್ಥನೆ ಹಾಗೂ ಸೇವಾ ಕಾರ್ಯಕ್ರಮಗಳು ಇಂದು ಸಂಜೆ 5.30 ಕ್ಕೆ  ವನಿತಾ ಸಮಾಜದ  ಶ್ರೀ ಸತ್ಯಸಾಯಿ ರಂಗ ಮಂದಿರದಲ್ಲಿ ನಡೆಯಲಿವೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪುಷ್ಪಲತಾ ಹಾಗು ಜೆ.ಜೆ.ಎಂ.ಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಕ್ಲಾ ಶೆಟ್ಟಿ ಆಗಮಿಸುವರು. ಸಮಾಜದ ಗೌರವಾಧ್ಯಕ್ಷರಾದ ಸಿ. ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಆಶ್ರಯ ಹಿರಿಯ ವನಿತೆಯರ ಆನಂದಧಾಮದ ವತಿಯಿಂದ `ವಿಮೋ ಚನ’ ವಿಶೇಷ ಚೇತನ ಹೆಣ್ಣು ಮಕ್ಕಳಿಗೆ ಕೊಡುಗೆ, `ಸಾಹಸ್‌’ ವಾಕ್‌ ಶ್ರವಣ ಕೇಂದ್ರದ ಮಕ್ಕಳಿಗೆ ಕೊಡುಗೆ, ಪ್ರೇಮಾಲಯ ಅನಾಥ ಹೆಣ್ಣು ಮಕ್ಕಳ ವಸತಿ ನಿಲಯದ ಮಕ್ಕಳಿಗೆ ಕೊಡುಗೆ, ಸಂಕಲ್ಪ ಮನೋವಿಕಲಚೇತನ ಮಕ್ಕಳಿಗೆ ಕೊಡುಗೆ ಕೊಡಲಾಗುವುದು.

error: Content is protected !!