ರಾಣೇಬೆನ್ನೂರಿನ ಅಶೋಕ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ವಿರಾಟ ಮಹಾಸಭಾ ಸಮಿತಿಯ ಗಣೇಶನ ವಿಸರ್ಜನೆ ಸೋಮವಾರ ನಡೆಯಲಿದ್ದು, ಇಂದು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸೋಮವಾರ ಬೆಳಿಗ್ಗೆ ಗಣೇಶನ ಮೆರವಣಿಗೆ ಪ್ರಾರಂಭ ಗೊಂಡು, ಪ್ರಮುಖ ಬೀದಿಗಳಲ್ಲಿ ಹಾಯ್ದು ರಾತ್ರಿ 10 ಗಂಟೆಗೆ ತುಂಗಭದ್ರಾ ನದಿಯಲ್ಲಿ ವಿಸರ್ಜನೆಗೊಳ್ಳ ಲಿದೆ. ಮೆರವಣಿಗೆ ತೆರಳುವ ಪ್ರಮುಖ ಸ್ಥಳಗಳಲ್ಲಿ ಹಲಗೇರಿಯ ಶಿವಪುತ್ರಪ್ಪ ಹರಿಯಾಳದ ಅನ್ನದ ಹಾಗೂ ನೀರಿನ ಪಾಕೆಟ್ ವಿತರಿಸಲಾಗುವುದು ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಡಿಜೆ ಗಳನ್ನು ತರಿಸಲಾಗಿದೆ ಎಂದು ಕಮಿಟಿಯ ಅಧ್ಯಕ್ಷ ನಾಗರಾಜ ಪವಾರ ತಿಳಿಸಿದರು. ಅವರ ಜೊತೆ ಪರಮೇಶ ಗೂಳಣ್ಣನವರ, ಬಸವರಾಜ ಹುಲ್ಲತ್ತಿ ಮತ್ತಿತರರಿದ್ದರು.
ಹಿಂದೂ ವಿರಾಟ ಗಣಪತಿ ಇಂದು ಅನ್ನ ಸಂತರ್ಪಣೆ
![15 rnr hindu virat ganapa 30.09.2023 ಹಿಂದೂ ವಿರಾಟ ಗಣಪತಿ ಇಂದು ಅನ್ನ ಸಂತರ್ಪಣೆ](https://janathavani.com/wp-content/uploads/2023/09/15-rnr-hindu-virat-ganapa-30.09.2023.jpg)