ದಾವಣಗೆರೆ, ಸೆ. 29-ನಗರದ `ಹಲೋ ಕನ್ನಡಿಗ’ ವಾರ ಪತ್ರಿಕೆ ವತಿಯಿಂದ ನಿಸರ್ಗ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಅಕ್ಟೋಬರ್ 2ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಶಿರಸಿಯ ನಿಸರ್ಗ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿರಸಿಯ ನಿಸರ್ಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕು. ಶೋಭಾ ವಿ. ಲಮಾಣಿ ಮತ್ತು ವಿನಯ ಪರಮೇಶ್ವರನಾಯ್ಕ ಅವರುಗಳಿಗೆ ನಿಸರ್ಗ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹಲೋ ಕನ್ನಡಿಗ ಸಂಪಾದಕ ಸಿ. ವೇದಮೂರ್ತಿ ತಿಳಿಸಿದ್ದಾರೆ.
ಅನಂತರಾವ್ ಬೀಳಗಿ ಸ್ಮಾರಕ ಶಿರಸಿಯ ನಿಸರ್ಗ ಆಸ್ಪತ್ರೆ ಇವರ ಸಹಯೋಗದೊಂದಿಗೆ ಈ ಕಾರ್ಯಕ್ರಮ ವನ್ನು ಗಾಂಧಿ ಜಯಂತಿ ಮತ್ತು ನಿಸರ್ಗ ಆಸ್ಪತ್ರೆ ನೂತನ ಕಟ್ಟಡದ 11ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅನಂತರಾವ್ ಬೀಳಗಿ ಮೆಮೋರಿಯಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ವಕೀಲ ಬಿ.ಡಿ. ವಿಶ್ವಾಮಿತ್ರ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪತ್ರಕರ್ತರೂ ಆದ ಸಾಹಿತಿ ಜಯರಾಮ ಹೆಗಡೆ (ಶಿರಸಿ) ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಿರಸಿಯ ಹಿರಿಯ ಪತ್ರಕರ್ತ ರಾಜು ಅಜ್ಜಿಬಾಳ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಅನಂತರಾವ್ ಬೀಳಗಿ ಮೆಮೋರಿಯಲ್ ಟ್ರಸ್ಟ್ ಕಾರ್ಯದರ್ಶಿ ರಾಮ ಜೋಶಿ, ಟ್ರಸ್ಟಿ ಡಾ. ಸಂತೋಷ ನಾಡಿಗೇರ್, ಮತ್ತೋರ್ವ ಟ್ರಸ್ಟಿ ಡಾ. ರವಿ ಬಿ. ಸಭಾಹಿತ ಅವರುಗಳು ಅತಿಥಿಗಳಾಗಿದ್ದಾರೆ.