ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ, ಸೆ.27- ಬ್ರಾಹ್ಮಣ ಸಮಾಜ ಸೇವಾ ಸಂಘದಡಿಯಲ್ಲಿ ಹಲವು ದಾನಿಗಳ ಸಹಾಯದಿಂದ ಸ್ಥಾಪಿಸಿರುವ ದತ್ತಿ ನಿಧಿಯಿಂದ ಆರ್ಥಿಕ ವಾಗಿ ಹಿಂದುಳಿದ ಹಾಗೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿರುವ ನಗರ ವ್ಯಾಪ್ತಿಗೆ ಬರುವ ತ್ರಿಮತಸ್ಥ ಬ್ರಾಹ್ಮಣ ಸಮಾಜದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಹಾಗೂ ಡಿಗ್ರಿ ಮಟ್ಟದ ವ್ಯಾಸಂಗ ಮಾಡುತ್ತಿರುವವರಾಗಿ ರಬೇಕು. ಅರ್ಜಿಗಳು ಬ್ರಾಹ್ಮಣ ಸಮಾಜ ಸೇವಾ ಸಂಘದ ಕಾರ್ಯಾಲಯ ದಲ್ಲಿ ಲಭ್ಯವಿದ್ದು, ಪೂರ್ಣಗೊಳಿಸಿದ ಅರ್ಜಿಯನ್ನು ನಾಳೆ ದಿನಾಂಕ 28 ರೊಳಗಾಗಿ ಸಲ್ಲಿಸಬೇಕಾಗಿದ್ದು, ವಿವರಕ್ಕಾಗಿ  9483860040, 9448566549 ಸಂಪರ್ಕಿಸಲು ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ತಿಳಿಸಿದ್ದಾರೆ.

error: Content is protected !!