ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಜಿಲ್ಲಾ ಘಟಕದಿಂದ ಅಧಿವಕ್ತ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಾನೂನು ಕಾರ್ಯಾಗಾರವನ್ನು ಇಂದು ಸಂಜೆ 4.30ಕ್ಕೆ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷರೂ ಆಗಿರುವ ಹಿರಿಯ ವಕೀಲ ಎಲ್. ದಯಾನಂದ್ ಅವರ ಅಧ್ಯಕ್ಷತೆಯಲ್ಲಿ ಏರ್ಪಾಡಾಗಿರುವ ಈ ಕಾರ್ಯಕ್ರಮದಲ್ಲಿ ಭೂ ಮಾಪನ ಇಲಾಖೆ ನಿವೃತ್ತ ಪರಿವೀಕ್ಷಕ ಡಾ. ಎಸ್. ರಂಗನಾಥ್ ಅವರು ಭೂ ಮಾಪನಾ ಮತ್ತು ಭೂ ದಾಖಲೆಗಳ ಕುರಿತು ಉಪನ್ಯಾಸ ನೀಡುವರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ, ಹಿರಿಯ ವಕೀಲರಾದ ಶ್ರೀಮತಿ ಜಿ.ಇ. ವನಜಾಕ್ಷಿ, ವಕೀಲ ಎಂ.ಎಸ್. ಮನೋಜ್ ಕುಮಾರ್ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ತಿನ ಹಿರಿಯ ವಕೀಲರು ಗಳನ್ನು ಸನ್ಮಾನಿಸಲಾಗುತ್ತದೆ ಎಂದು ಜಿಲ್ಲಾ
ಅಧಿವಕ್ತ ಪರಿತ್ ಕಾರ್ಯದರ್ಶಿ ವಿ. ವಸಂತ ಕುಮಾರ್ ತಿಳಿಸಿದ್ದಾರೆ.