ಹೊನ್ನಾಳಿಯಲ್ಲಿ ಇಂದು ಪಂಚಾಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಸಭೆ

ಹೊನ್ನಾಳಿ, ಸೆ. 22- ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಿಣಿ ಹಾಗೂ ಸರ್ವ ಸದಸ್ಯರ ಸಭೆಯು ನಾಳೆ ದಿನಾಂಕ 23 ರ ಶನಿವಾರ ಹಿರೇಕಲ್ಮಠದ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಹೊನ್ನಾಳಿ ಹಾಗೂ ನ್ಯಾಮತಿ  ಅವಳಿ ತಾಲ್ಲೂಕು ಸಮಾಜದ ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಗೌರವಾಧ್ಯಕ್ಷ ಡಾ.ರಾಜಕುಮಾರ್ ಮಾತನಾಡಿ, ಈ ಸಭೆಯಲ್ಲಿ 1500 ಸದಸ್ಯರು ಬರುವ ನಿರೀಕ್ಷೆ ಇದೆ ಎಂದರು. ರಾಜ್ಯ ಸ.ಕಾರ್ಯದರ್ಶಿ ದಾವಣಗೆರೆ ಲೋಕೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ರಾಜ್ಯ ಉಪಾಧ್ಯಕ್ಷ ಪರಮೇಶ ಪಟ್ಟಣಶೆಟ್ಟಿ, ಜಿಲ್ಲಾ ಸಮಿತಿಯ ನ್ಯಾಮತಿ ಪಂಚಣ್ಣ, ನ್ಯಾಮತಿ ತಾಲ್ಲೂಕು ಚಂದ್ರಶೇಖರ ಪೂಜಾರ, ವಾಗೀಶ, ಮಹಿಳಾ ಅಧ್ಯಕ್ಷ ಶಿಲ್ಪಾ ರಾಜುಗೌಡ, ಸಮಾಜದ ಮುಖಂಡರಾದ ಕುಂಕೋದ್ ಸೋಮಣ್ಣ, ಹಾಲೇಶ, ಯುವ ಘಟಕದ ಅಧ್ಯಕ್ಷ ಹಾಲೇಶ, ನಗರ  ಘಟಕದ ಅಧ್ಯಕ್ಷ ಗಿರೀಶ ಸೇರಿದಂತೆ ಸಮಾಜದ ಮುಖಂಡರು ಇದ್ದರು.

error: Content is protected !!