ಪಕ್ಷದಲ್ಲಿಯೇ ಇರಲು ಮನವಿ ಮಾಡಿದ್ದಾರೆ : ಗುರುಸಿದ್ದನಗೌಡ್ರು

ದಾವಣಗೆರೆ, ಸೆ.10- ಬಿಜೆಪಿ ಜಿಲ್ಲಾ ಘಟಕದ ಕೆಲವು ನಾಯಕರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ, ನಿಯಮಬಾಹೀರವಾಗಿ ತಮ್ಮನ್ನು ಉಚ್ಚಾಟಿಸಿರುವ ಬಗ್ಗೆ ಪಕ್ಷದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಆವರ ಗಮನಕ್ಕೆ ತರಲಾಗಿದೆ. ಅವರು ಈ ಕುರಿತು ಜಿಲ್ಲಾಧ್ಯಕ್ಷರಿಗೆ ವಿವರಣೆ ಕೇಳಿ ಕ್ರಮ ಕೈಗೊಳ್ಳಲಾಗುವುದು. ಆಗಿರುವ ಪ್ರಮಾದವನ್ನು ಮನ್ನಿಸಿ, ನೀವು ಪಕ್ಷದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಗುರುಸಿದ್ಧನಗೌಡ್ರ ಹೇಳಿದ್ದಾರೆ.

ಗುರುಸಿದ್ದನಗೌಡ್ರ ಅವರ ಪುತ್ರ ಡಾ. ರವಿಕುಮಾರ್ ಮಾತನಾಡಿ, ತಾವು ದಾವಣಗೆರೆ ಲೋಕಸಭೆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ವಿಚಾರವಾಗಿ ಬಿಜೆಪಿ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ಬದ್ಧ. ಬಿಜೆಪಿ ಪಕ್ಷಕ್ಕೆ ತಮ್ಮ ನಿಷ್ಠೆ ಅಚಲ ಎಂದರು.

error: Content is protected !!