11ರಂದು ಆನೆಕೊಂಡದಲ್ಲಿ ಜಾತ್ರೋತ್ಸವ, ಕಾರಣಿಕೋತ್ಸವ

11ರಂದು ಆನೆಕೊಂಡದಲ್ಲಿ ಜಾತ್ರೋತ್ಸವ, ಕಾರಣಿಕೋತ್ಸವ

ದಾವಣಗೆರೆ, ಸೆ. 7- ಶ್ರೀ ಕ್ಷೇತ್ರ ಆನೆಕೊಂಡದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ ದಿನಾಂಕ 11ರ ಶ್ರಾವಣ ಮಾಸದ ಕಡೇ ಸೋಮವಾರದಂದು ಸಂಜೆ 4 ಗಂಟೆಗೆ ಶ್ರೀ ಬಸವೇಶ್ವರ ಮತ್ತು ನೀಲಾನಹಳ್ಳಿಯ  ಶ್ರೀ ಆಂಜನೇಯ ಸ್ವಾಮಿ ಹಾಗೂ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ಮತ್ತು ಸುತ್ತಮುತ್ತಲಿನ ದೇವರುಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆದು ನಂತರ ಸಂಜೆ 6 ಗಂಟೆಗೆ   ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರೋತ್ಸವ ಮತ್ತು ಕಾರಣಿ ಕೋತ್ಸವ ಜರುಗಲಿದೆ ಎಂದು ದೇವಸ್ಥಾನದ ಕನ್ವೀನರ್  ಗೌಡ್ರು ಅಜ್ಜಪ್ಪ ತಿಳಿಸಿದ್ದಾರೆ

ದಿನಾಂಕ 9ರ ಶನಿವಾರ ಶನಿದೇವರ ಪುರಾಣ ಹಾಗೂ ದಿನಾಂಕ 10ರ  ಭಾನುವಾರ ಅನ್ನ ಸಂತರ್ಪಣೆ ಹಾಗೂ ರಾತ್ರಿ 9ಕ್ಕೆ ಭಜನಾ ಕಾರ್ಯಕ್ರಮವಿರುತ್ತದೆ.

error: Content is protected !!