ದಾವಣಗೆರೆ, ಸೆ. 2 – ವಿಶ್ವವಿದ್ಯಾನಿಲಯ ದಾವಣಗೆರೆ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಾಮನೂರಿನ ಡಿ.ಎಚ್. ಗಿರೀಶ್ ಅವರು ಮಂಡಿಸಿರುವ `ಮೈಕ್ರೋ ಫೈನಾನ್ಸ್ ಅಂಡ್ ವುಮೆನ್ ಎಂಪರ್ಮೆಂಟ್ ಇನ್ ಕರ್ನಾಟಕ : ಆನ್ ಇಂಪೀರಿಕಲ್ ಸ್ಟಡಿ ಇನ್ ದಾವಣಗೆರೆ ಡಿಸ್ಟ್ರಿಕ್ಟ’ ಎಂಬ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಯವು ಪಿ.ಹೆಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ. ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ ಅವರು ಗಿರೀಶ್ ಅವರಿಗೆ ಮಾರ್ಗದರ್ಶನ ನೀಡಿದ್ದರು.
ಡಿ.ಎಚ್. ಗಿರೀಶ್ ಅವರಿಗೆ ಪಿ.ಎಚ್.ಡಿ ಪದವಿ
![26 girish 04.09.2023 ಡಿ.ಎಚ್. ಗಿರೀಶ್ ಅವರಿಗೆ ಪಿ.ಎಚ್.ಡಿ ಪದವಿ](https://janathavani.com/wp-content/uploads/2023/09/26-girish-04.09.2023.jpg)