ಹಳೇ ಕುಂದುವಾಡದಲ್ಲಿ ಇಂದು ಶ್ರಾವಣ ಮಾಸದ ಕಾರ್ಯಕ್ರಮ

ಹಳೇ ಕುಂದುವಾಡದಲ್ಲಿ ಇಂದು ಶ್ರಾವಣ ಮಾಸದ ಕಾರ್ಯಕ್ರಮ

ಹಳೇ ಕುಂದುವಾಡದಲ್ಲಿರುವ ಓಂ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ  ಇಂದು  ಶ್ರಾವಣ ಮಾಸದ ಕಾರ್ಯಕ್ರಮ  ನಡೆಯಲಿದೆ.  ದಿವ್ಯಸಾನ್ನಿಧ್ಯವನ್ನು ಧರ್ಮಾಧಿಕಾರಿ ಜೆ. ರಾಜಣ್ಣ ವಹಿಸುವರು. 

ಇಂದು ಬೆಳಿಗ್ಗೆ 6 ಗಂಟೆಗೆ ಏಕಾದಶ ರುದ್ರಾಭಿಷೇಕ ನಡೆಯುವುದು. ಟ್ರಸ್ಟ್‌ ಗೌರವಾಧ್ಯಕ್ಷ ಶಾಸಕ  ಶಾಮನೂರು ಶಿವಶಂಕರಪ್ಪ ಅವರ ಆಯುಷ್ಯ ಆರೋಗ್ಯ ಅಭಿವೃದ್ಧಿಗಾಗಿ ಮೃತ್ಯುಂಜಯ ಜಪ, ಸರ್ವಸಿದ್ಧಿ ಹೋಮ, ಹವನ ಏರ್ಪಾಡಾಗಿದೆ. 

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌, ಡಾ.  ಪ್ರಭಾ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹಾಗೂ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ. ಹೆಚ್‌.ಬಿ. ಅರವಿಂದ್‌, ಸತ್ಯನಾರಾಯಣ ಆರ್‌. ರಾಯ್ಕರ್‌, ಪ್ರಸನ್ನಕುಮಾರ್‌ ಅವರುಗಳು ಮಧ್ಯಾಹ್ನ ನಡೆಯುವ ಹೋಮ, ಹವನದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳುವರು. 

ಮುಖ್ಯ ಅತಿಥಿಗಳಾಗಿ ಡಾ. ಎಂ.ವಿ. ವೆಂಕಟೇಶ್‌, ಶ್ರೀಮತಿ ಉಮಾ ಪ್ರಶಾಂತ್‌, ಪಿ. ಲೋಕೇಶ್‌, ಶ್ರೀಮತಿ ರೇಣುಕಾ, ಅಶ್ವತ್ಥ್, ಟಾಟಾ ಶಿವನ್‌, ಡಾ. ಹೆಚ್‌. ವಿಶ್ವನಾಥ್‌, ವೆಂಕಟರಾಮರೆಡ್ಡಿ, ಲಿಂಗರಾಜ್‌ ಎ.ಎಂ., ಪೂಜಾರಪ್ಪ, ಜಿ.ಎ. ಶ್ಯಾಮಸುಂದರ್‌, ರಾಮಕೃಷ್ಣ ಎಸ್. ಗಂಗೋಜಿ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶಾಂತನಗೌಡರು, ದೇವೇಂದ್ರಪ್ಪ, ಬಿ.ಪಿ. ಹರೀಶ್‌, ಕೆ.ಎಸ್. ಬಸವಂತಪ್ಪ, ಶಿವಗಂಗಾ ಬಸವರಾಜ್‌, ರುದ್ರಪ್ಪ ಲಮಾಣಿ, ಬಸವರಾಜ್‌ ಶಿವಣ್ಣನವರ್, ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್‌ ಅವರುಗಳನ್ನು ಸನ್ಮಾನಿಸಲಾಗುವುದು.

error: Content is protected !!