ನಗರದಲ್ಲಿಂದು ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂದು ಬೆಳಿಗ್ಗೆ 10.30 ಕ್ಕೆ ಕುವೆಂಪು ಕನ್ನಡ ಭವನದಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಮತ್ತು ವಿತರಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.

ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ. ಎಂ.ಸಿದ್ಧೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಮೇಯರ್ ವಿನಾಯಕ ಪೈಲ್ವಾನ್, `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್,  ಶ್ರೀನಿವಾಸ ದಾಸಕರಿಯಪ್ಪ, ವಾರ್ತಾಧಿಕಾರಿ ಧನಂಜಯಪ್ಪ, ಹಿರಿಯ ಪತ್ರಕರ್ತರಾದ ಸಿದ್ಧಯ್ಯ ಹಿರೇಮಠ, ಎಂ.ಬಿ. ನವೀನ್, ಸದಾನಂದ ಹೆಗಡೆ, ನಾಗರಾಜ್ ಬಡದಾಳ್, ಮಂಜುನಾಥ ಗೌರಕ್ಕಳವರ, ಕೆ.ಏಕಾಂತಪ್ಪ, ಬಿ.ಎನ್. ಮಲ್ಲೇಶ್, ಇ.ಎಂ. ಮಂಜುನಾಥ, ಸಂಘದ ಅಧ್ಯಕ್ಷ ಹೆಚ್. ಚಂದ್ರು ಭಾಗವಹಿಸಲಿದ್ದಾರೆ. 

error: Content is protected !!