ಕುಡಿಯುವ ನೀರು ಸಮರ್ಪಕವಾಗಿ ವಿತರಿಸಲು ಬಿಜೆಪಿ ಆಗ್ರಹ

ದಾವಣಗೆರೆ, ಆ. 31- ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ತುರ್ತಾಗಿ ಕ್ರಮ ಕೈಗೊಂಡು ಸಮರ್ಪಕವಾಗಿ ಕುಡಿಯುವ ನೀರನ್ನು ವಿತರಿಸಲು ಆಗ್ರಹಿಸಿ ಬಿಜೆಪಿಯಿಂದ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರ ನಿಯೋಗವು, ಮಹಾಪೌರ ರನ್ನು ಭೇಟಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿತು. ಕಳೆದ ಒಂದು ತಿಂಗಳಿನಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, 14 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕಾಡಾ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯವಾದ ನೀರು ಸಂಗ್ರಹಿ ಸಿಕೊಳ್ಳಲು ತುರ್ತು ಕ್ರಮ ಜರುಗಿಸಬೇಕೆಂದು ನಿಯೋಗ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಪ್ರಸನ್ನಕುಮಾರ್, ಎಸ್.ಟಿ. ವೀರೇಶ್, ಜೆ.ಎನ್. ಶ್ರೀನಿವಾಸ್, ಶಿವಾನಂದ್, ಕೆ.ಎಂ. ವೀರೇಶ, ಎಲ್.ಡಿ. ಗೋಣೆಪ್ಪ, ಶಾಂತಕುಮಾರ್ ಸೋಗಿ, ಮುಖಂಡರಾದ ಸುರೇಶ ಗಂಡಗಾಳೆ, ಯೋಗೀಶ್, ಎಸ್.ಟಿ. ಶ್ರೀನಿವಾಸ್, ವಿನಯ್ ದಿಳ್ಳೆಪ್ಪ ಇದ್ದರು. 

error: Content is protected !!