ಚನ್ನಗಿರಿ : ಕಾರು ಹರಿಸಿ ವಿಕೃತಿ ಮೆರೆದ ಚಾಲಕ

ಚನ್ನಗಿರಿ, ಆ. 31- ತಾಲ್ಲೂಕಿನ ಕರೇಕಟ್ಟೆ ಗ್ರಾಮದ ಜಂಬಣ್ಣ ಸರ್ಕಲ್‌ನಲ್ಲಿ ಕಾರು ಚಾಲಕನೊಬ್ಬ ಶ್ವಾನದ ಮೇಲೆ ಕಾರು ಹತ್ತಿಸಿ ವಿಕೃತಿ ಮರೆದಿದ್ದಾನೆ. 

ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಒಟ್ಟು ಮೂರು ನಾಯಿಗಳ ಮೇಲೆ ಕಾರು ಹತ್ತಿಸಿದ್ದು, ಒಂದು ನಾಯಿ ಸ್ಥಳದಲ್ಲೇ ಮೃತಪಟ್ಟಿದೆ. ಎರಡು ಶ್ವಾನಗಳಿಗೆ ಗಂಭೀರ ಗಾಯಗಳಾಗಿವೆ.

ವಿಕೃತಿ ಮೆರೆದ ಕಾರು ಚಾಲಕ ಮಿರ್ಜಾ ಮುಸ್ತಾಕ್ ಅಹಮದ್ ಚನ್ನಗಿರಿ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಘಟನೆಗೆ ಸಾಕ್ಷಿಯಾಗಿದ್ದ ಗ್ರಾಮಸ್ಥರು ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

error: Content is protected !!